ಶನಿವಾರ, ಆಗಸ್ಟ್ 1, 2026

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ - Vidyabhushana

 


ಶೋಭಾನವೆನ್ನಿರೆ ಸುರರೊಳು ಶುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||


ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ

ಮುತ್ತೈದೆಯರೆಲ್ಲ ಧವಳದ

ಮುತ್ತೆದೆರೆಲ್ಲ ಧವಳದ ಪದವ ಪಾ-

ಡುತ್ತಲೆತ್ತಿದರೆ ಸಿರಿವರಗೆ ||೯೩||


Śōbhānavennire suraroḷu śubhaganige

śōbhānavenni suguṇanige

śōbhānavennire trivikramarāyage

śōbhānavenni surapriyage śōbhāne 

||pallavi||


ratnadāratige sutta muttane tumbi

muttaideyarella dhavaḷada

muttederella dhavaḷada padava pā-

ḍuttalettidare sirivarage ||93||


Meaning


• Sing praises of auspiciousness to the bestower of good among the gods. 

• Sing praises to the one full of good virtues. 

• Sing praises to the Lord Trivikrama (Vamana). 

• Sing praises to the dear one of the gods, let it be auspicious! 


Verse (93) 


• Filling the gem-studded arati (lamp plate) all around with pearls, 

• All the married women (muttideyaru), 

• Singing white-colored (auspicious traditional) songs, 

• Wave the arati for the consort of Sri (Lakshmi/Lord Hari). 



ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ

ಪಕ್ಷಿವಾಹನ್ನಗೆರಗುವೆ

ಪಕ್ಷಿವಾಹನ್ನಗೆರಗುವೆ ಅನುದಿನ

ರಕ್ಷಿಸಲಿ ನಮ್ಮ ವಧೂವರರ ||೧||


ಪಾಲಸಾಗರವನ್ನು ಲೀಲೆಯಲಿ ಕಡೆಯಲು

ಬಾಲೆ ಮಹಾಲಕ್ಷುಮಿ ಉದಿಸಿದಳು

ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ

ಪಾಲಿಸಲಿ ನಮ್ಮ ವಧೂವರರ ||೨||


ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ

ಸುಮ್ಮನೆಯಾಗಿ ಮಲಗಿಪ್ಪ

ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು

ಜನ್ಮವೆಂಬುದು ಅವತಾರ ||೩||


ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ

ಅಂಬುಜವೆರಡು ಕರಯುಗದಿ

ಅಂಬುಜವೆರಡು ಕರಯುಗದಿ ಧರಿಸಿ

ಪೀತಾಂಬರವನುಟ್ಟು ಮೆರೆದಳೆ ||೪||


ಒಂದು ಕರದಿಂದ ಅಭಯವನೀವಳೆ

ಮತ್ತೊಂದು ಕೈಯಿಂದ ವರಗಳ

ಕುಂದಿಲ್ಲಲದಾನಂದಸಂದೋಹ ಉಣಿಸುವ

ಇಂದಿರೆ ನಮ್ಮ ಸಲಹಲಿ ||೫||


ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು

ನಲಿವ ಕಾಲಂದುಗೆ ಘಲಕೆನಲು

ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ

ಸಲಹಲಿ ನಮ್ಮ ವಧೂವರರ ||೬||


ರನ್ನದ ಮೊಲೆಗಟ್ಟು ಚಿನ್ನದಾಭರಣಗಳ

ಚೆನ್ನೆ ಮಹಲಕ್ಷುಮಿ ಧರಿಸಿದಳೆ

ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ

ತನ್ನ ಮನೆಯ ವಧೂ-ವರರ ಸಲಹಲಿ ||೭||


ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು

ತುಂಬಿಗುರುಳ ಮುಖಕಮಲ

ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ

ದಂಬೆ ವಧೂವರರ ಸಲಹಲಿ ||೮||


ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ

ಕಸ್ತೂರಿ ತಿಲಕ ಧರಿಸಿದಳೆ

ಕಸ್ತೂರಿ ತಿಲಕ ಧರಿಸಿದಳಾ ದೇವಿ

ಸರ್ವತ್ರ ವಧೂವರರ ಸಲಹಲಿ ||೯||


ಅಂಬುಜನಯನಗಳ ಬಿಂಬಾಧರದ ಶಶಿ-

ಬಿಂಬದಂತೆಸೆವ ಮೂಗುತಿಮಣಿಯ ಶಶಿ-

ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ

ಉಂಬುದಕೀಯಲಿ ವಧುವರರ್ಗೆ ||೧೦||


ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ

ನೆತ್ತಿಯ ಮೇಲೆ ಧರಿಸಿದೆಳೆ

ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ

ಭಕ್ತಿಯ ಜನರ ಸಲಹಲಿ ||೧೧||


ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ

ಚೆಂದದ ತುರುಬಿಗೆ ತುರುಬಿದಳೆ

ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-

ಯಿಂದ ವಧೂವರರ ಸಲಹಲಿ ||೧೨||


ಎಂದೆಂದಿಗು ಬಾಡದ ಅರವಿಂದದ ಮಾಲೆಯ

ಇಂದಿರೆ ಪೊಳೆವ ಕೊರಳಲ್ಲಿ

ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-

ಳಿಂದು ವಧೂವರರ ಸಲಹಲಿ ||೧೩||


ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ

ಭಾಮೆ ಮಹಲಕ್ಷುಮಿ ಧರಿಸಿದಳೆ

ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ

ಸೇವಕ ಜನರ ಸಲಹಲಿ ||೧೪||


ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು

ಲೋಲಾಕ್ಷಿ ಮೆಲ್ಲನೆ ನಡೆತಂದಳು

ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು

ಆಲೋಚಿಸಿದಳು ಮನದಲ್ಲಿ ||೧೫||


ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ

ಮನ್ನದಿ ನಾಚಿ ಮಹಲಕ್ಷುಮಿ

ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ

ಉನ್ನತ ದೋಷಗಳನೆಣಿಸಿದಳು ||೧೬||


ಕೆಲವರು ತಲೆಯೂರಿ ತಪಗೈದು ಪುಣ್ಯವ

ಗಳಿಸಿದ್ದರೇನೂ ಫಲವಿಲ್ಲ

ಜ್ವಲಿಸುವ ಕೋಪದಿ ಶಾಪವ ಕೊಡುವರು

ಲಲನೆಯನಿವರು ಒಲಿಸುವರೆ ||೧೭||


ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ

ಕಲ್ಲಿಸಿ ಕೊಡುವ ಗುರುಗಳು

ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು

ಸಲ್ಲದ ಪುರೋಹಿತಕ್ಕೊಳಗಾದರು ||೧೮||


ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ

ಭಾಮಿನಿಯ ಹಿಂದೆ ಹಾರಿದವ

ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ

ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||


ನಶ್ವರೈಶ್ವರ್ಯವ ಬಯಸುವನೊಬ್ಬ ಪರ-

ರಾಶ್ರಯಿಸಿ ಬಾಳುವ ಈಶ್ವರನೊಬ್ಬ

ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ

ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||


ಮಾವನ ಕೊಂದೊಬ್ಬ ಮರುಳಾಗಿಹನು

ಗಾಢ ಹಾರ್ವನ ಕೊಂದೊಬ್ಬ ಬಳಲಿದ

ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ

ಶಿವನಿಂದೊಬ್ಬ ಬಯಲಾದ ||೨೧||


ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ

ಅಮ್ಮಮ್ಮ ತಕ್ಕ ಗುಣವಿಲ್ಲ

ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ

ಮರ್ಮವ ಮೆಟ್ಟಿ ಕೊಲಿಸುವ ||೨೨||


ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ

ಬಲ್ಲಿದಗಂಜಿ ಬರಿಗೈದ

ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-

ತಾಳಕ್ಕೆ ಇಳಿದ ಗಡ ||೨೩||


ಎಲ್ಲರಾಯುಷ್ಯವ ಶಿಂಶುಮಾರದೇವ

ಸಲ್ಲೀಲೆಯಿಂದಲಿ ತೊಲಗಿಸುವ

ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು

ಬಲ್ಲವರೆನ್ನ ಭಜಿಸುವರು ||೨೪||


ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ

ವಿಕೃತಿಗೊಳಾಗಿ ಭವದಲ್ಲಿ

ಸುಖದುಃಖವೆಂಬ ಬೊಮ್ಮಾದಿ ಜೀವರು

ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||


ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ

ಒಬ್ಬನಾವನಿಗೆ ಶಯನಾಹ

ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ

ಅಬ್ಬರದಲಾವಾಗ ಸುಳಿವರು ||೨೬||


ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ

ಸರ್ವರಿಗಾವ ಅಮೃತವ

ಸರ್ವರಿಗಾವ ಅಮೃತವನುಣಿಸುವ ಅವ-

ನೊಬ್ಬನೆ ನಿರನಿಷ್ಟ ನಿರವದ್ಯ ||೨೭||


ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ

ಒರೆದು ನೋಡಲು ನರಹರಿಗೆ

ನರಕಯಾತನೆ ಸಲ್ಲ ದುರಿತಾತಿದೂರನಿಗೆ

ಮರುಳ ಮನಬಂದಂತೆ ನುಡಿಯದಿರು ||೨೮||


ಒಂದೊಂದು ಗುಣಗಳು ಇದ್ದಾವು ಇವರಲ್ಲಿ

ಸಂದಣಿಸಿವೆ ಬಹು ದೋಷ

ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು

ಇಂದಿರೆ ಪತಿಯ ನೆನೆದಳು ||೨೯||


ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು

ತೀವಿದ್ದ ಹರಿಗೆ ದುರಿತವ

ಭಾವಜ್ನರೆಂಬರೆ ಆಲದೆಲೆಯ ಮೆಲೆ

ಶಿವನ ಲಿಂಗವ ನಿಲಿಸುವರೆ ||೩೦||


ಹಸಿ-ತೃಷೆ-ಜರೆ-ಮರಣ-ರೋಗ-ರುಜೆಗಳೆಂಬ

ಅಸುರ-ಪಿಶಾಚಿಗಳೆಂಬ ಭಯವೆಂಬ

ವ್ಯಸನ ಬರಬಾರದು ಎಂಬ ನಾರಾಯಣಗೆ

ಪಶು ಮೊದಲಾಗಿ ನೆನೆಯದು ||೩೧||


ತಾ ದುಃಖಿಯಾದರೆ ಸುರರಾರ್ತಿಯ ಕಳೆದು

ಮೋದವೀವುದಕ್ಕೆ ಧರೆಗಾಗಿ

ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ

ಭಾಧಿಪ ಕೆಸರ ಬಿಡಿಸುವನೆ ||೩೨||


ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ

ಜನ್ಮಲಯವಿದವನಿಗೆ

ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ

ಅಮ್ಮ ಇವಗೆ ಹಸಿ-ತೃಷೆಯುಂಟೆ ||೩೩||


ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ

ಯೋಗಿಗೆ ಉಂಟೆ ಧನಧಾನ್ಯ

ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ

ಮತ್ತಾಗಲೆಲ್ಲಿಹುದು ವಿಚಾರಿಸಿರೊ ||೩೪||


ರೋಗವನೀವ ವಾತ ಪಿತ್ತ ಶ್ಲೇಷ್ಮ

ಆಗ ಕೂಡುವುದೆ ರಮೆಯೊಡನೆ

ಭೋಗಿಸುವವಗೆ ದುರಿತವ ನೆನೆವರೆ

ಈ ಗುಣನಿಧಿಗೆ ಎಣೆಯುಂಟೆ ||೩೫||


ರಮ್ಮೆದೇವಿಯರನಪ್ಪಿಕೊಂಡಿಪ್ಪುದು

ರಮ್ಮೆಯರಸಗೆ ರತಿ ಕಾಣಿರೊ

ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ

ಕುಮ್ಮಾರರ್ ಯಾಕೆ ಜನಿಸರು ||೩೬||


ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ

ಬೇಕೆಂಬ ನ್ಯಾಯವ ತಿಳಿದುಕೊ

ಶ್ರೀಕೃಷ್ಣನೊಬ್ಬನೆ ಸರ್ವ ದೋಷಕ್ಕೆ ಸಿ

ಲುಕನೆಂಬುದು ಸಲಹಲಿಕೆ ||೩೭||


ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ

ಸಲ್ಲದು ರೋಗ ರುಜಿನವು

ಬಲ್ಲ ವೈದ್ಯರ ಕೆಳಿ ಅಜೀರ್ತಿಮೂಲವೆಲ್ಲ

ಸಲ್ಲದು ರೋಗ ರುಜಿನವು ||೩೮||


ಇಂಥಾ ಮೂರುತಿಯ ಒಳಗೊಂಬ ನರಕ ಬಹು

ಭ್ರಾಂತ ನೀನೆಲ್ಲಿಂದ ತೋರಿಸುವೆಲೊ

ಸಂತೆಯ ಮರುಳ ಹೋಗೆಲೊ ನಿನ್ನ ಮಾತ

ಸಂತರು ಕೇಳಿ ಸೊಗಸರು ||೩೯||


ಶ್ರೀನಾರಾಯಣರ ಜನನೀ ಜನಕರ

ನಾನೆಂಬ ವಾದೀ ನುಡಿಯಲೊ

ಜಾಣರಿಂದರಿಯ ಮೂಲ ರೂಪವ ತೊರಿ

ಶ್ರೀ ನರಸಿಂಹನ ಅವತಾರ ||೪೦||


ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ

ನೆಂಬ ಶ್ರೀ ಹರಿಯ ಪಿತನಾರು?

ಎಂಬ ಶ್ರೀ ಹರಿಯ ಪಿತನಾರು ಅದರಿಂದ ಸ್ವಾ

ಯಂಭುಗಳೆಲ್ಲ ಅವತಾರ ||೪೧||


ದೇವಕಿಯ ಗರ್ಭದಲಿ ದೇವನವತರಿಸಿದ

ಭಾವವನ್ನು ಬಲ್ಲ ವಿವೇಕಿಗಳು

ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ-

ಆವ ಪರಿಯಲ್ಲಿ ನುಡಿಯುವಿಯೊ ||೪೨||


ಆಕಳಿಸುವಾಗ ಯಶೋದಾದೇವಿಗ

ದೇವ ತನ್ನೊಳಗೆ ಹುದುಗಿದ್ದ

ತ್ರಿಭುವನವೆಲ್ಲವ ತೋರಿದುದಿಲ್ಲವೆ

ಆ ವಿಷ್ಣು ಗರ್ಭದೊಳಡಗುವನೆ ||೪೩||


ಆನೆಯ ಮಾನದಲ್ಲಿ ಅಡಗಿಸಿದವರುಂಟೆ

ಅನೇಕ ಕೋಟಿ ಅಜಾಂಡವ

ಅಣುರೇಣು ಕೂಪದಲಿ ಆಳ್ದ ಶ್ರೀ ಹರಿಯ

ಜನನಿ ಜಠರವು ಒಳಗೊಂಬುದೆ ||೪೪||


ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ

ಮದನನಿವನ ಕುಮಾರನು

ಕದನದಿ ಕಣೆಗಳ ಇವನೆದೆಗೆಸೆವನೆ

ಸುದತೇರಿವನಿಂತು ನಿಂತು ಸಿಲುಕುವನೆ ||೪೫||


ಅದರಿಂದ ಕೃಷ್ಣನಿಗೆ ಪರನಾರೀ ಸಂಗವ ಕೋ-

ವಿದರಾದ ಬುಧರು ನುಡಿವರೆ

ಸದರವೆ ಈ ಮಾತು ಸರ್ವ ವೇದಂಗಳು

ಮುದದಿಂದ ತಾವು ಸ್ತುತಿಸುವವು ||೪೬||


ಎಂದ ಭಾಗವತದ ಚೆಂದದ ಮಾತನು

ಮಂದ ಮಾನವ ಮನಸಿಗೆ

ತಂದುಕೊ ಜಗಕ್ಕೆ ಕೈವಲ್ಯವೀವ ಮು-

ಕುಂದಗೆ ಕುಂದು ಕೊರತೆ ಸಲ್ಲದು ||೪೭||


ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ

ಚಿತ್ತ ಸ್ತ್ರೀಯರಿಗೆ ಎರಗುವದೆ

ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ

ಸತ್ಯಸಂಕಲ್ಪ ಬೆರಸಿದ್ದ ||೪೮||


ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ

ಹತ್ತು ಹತ್ತೆನಿಪ ಕ್ರಮದಿಂದ

ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ

ಅರ್ತಿಯ ಸೃಷ್ಟಿ ಹರಿಗಿದು ||೪೯||


ರೋಮ-ರೋಮಕೂಪ ಕೋಟಿವೃಕಂಗಳ

ನಿರ್ಮಿಸಿ ಗೋಪಾಲರ ತೆರಳಿಸಿದ

ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ

ಮಹಿಮೆ ಬಲ್ಲವರಿಗೆ ಸಲಹಲಿಕೆ ||೫೦||


ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ

ಸಣ್ಣ ಬಾಯೊಳಗೆ ಜಗಂಗಳ

ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ

ಘನತೆ ಬಲ್ಲವರಿಗೆ ಸಲಹಲಿಕೆ ||೫೧||


ನಾರದ ಸನಕಾದಿಮೊದಲಾದ ಯೋಗಿಗಳು

ನಾರಿಯರಿಗೆ ಮರುಳಾಹರೆ

ಓರಂತೆ ಶ್ರೀಕೃಷ್ಣನಡಿಗೆರಗುವರೆ

ಆರಾಧಿಸುತ್ತ ಭಜಿಸುವರೆ ||೫೨||


ಅಂಬುಜಸಂಭವ ತ್ರಿಯಂಬಕ ಮೊದಲಾದ

ನಂಬಿದವರಿಗೆ ವರವಿತ್ತ

ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ

ಇಂಬಿದ್ದರಿವನ ಭಜಿಸುವರೆ ||೫೩||


ಅವನಂಗುಷ್ಠವ ತೊಳೆದ ಗಂಗಾದೇವಿ

ಪಾವನಳೆನಿಸಿ ಮೆರೆಯಳೆ

ಜೀವನ ಸೇರುವ ಪಾಪವ ಕಳೆವಳು

ಈ ವಾಸುದೇವಗೆ ಎಣೆಯುಂಟೆ ||೫೪||


ಕಿಲ್ಬಿಷವಿದ್ದರೆ ಅಗ್ರ ಪೂಜೆಯನು

ಸರ್ವರಾಯರ ಸಭೆಯೊಳಗೆ

ಉಬ್ಬಿದ ಮನದಿಂದ ಧರ್ಮಜ ಮಾಡುವನೆಲೆ

ಕೊಬ್ಬದಿರೆಲೊ ಪರವಾದಿ ||೫೫||


ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ

ಜೀವಂತರಿಗೆ ನರಕದಲ್ಲಿ

ನೋವನೀವನು ನಿಮ್ಮ ಯಮದೇವನು

ನೋವ ನೀ ಹರಿಯ ಗುಣವರಿಯ ||೫೬||

******* 


 ಶೋಭನವೆನ್ನಿರೆ ಸುರರೊಳು ಸುಭಗನಿಗೆ 

 ಶೋಭನವೆನ್ನೀ ಸುಗುಣನಿಗೆ । 

 ಶೋಭನವೆನ್ನಿರೆ ತ್ರಿವಿಕ್ರಮರಾಯನಿಗೆ 

 ಶೋಭನವೆನ್ನೀ ಸುರಪ್ರಿಯಗೆ ॥ ಶೋಭಾನೆ ॥  ॥ಪಲ್ಲವಿ॥ 



video is from youtube - Naada Ninaadam

ಶ್ರೀ ವಾದಿರಾಜ ಗುರುಸಾರ್ವಭೌಮರು ರಚಿಸಿದ "ಶ್ರೀ ಲಕ್ಷ್ಮೀ ಶೋಭನ ಪದ"ವನ್ನು ಪಾರಂಪರಿಕವಾಗಿ ಹಾಡುವ ಶೈಲಿಯಲ್ಲಿ ಪ್ರಸ್ತುತಪಡಿಸುವ ವಿನಮ್ರ ಪ್ರಯತ್ನವಿದು.

ಶ್ರೀ ಲಕ್ಷ್ಮೀನಾರಾಯಣರು ಇದನ್ನು ಹಾಡಿದವರಿಗೂ, ಕೇಳುಗರಿಗೂ ಸರ್ವಾಭೀಷ್ಟವನ್ನು ಕರುಣಿಸಲಿ ಎಂದು ಹಾರೈಸುತ್ತೇವೆ.



part two


ನರಕವಾಳುವ ಯಮಧರ್ಮರಾಯ

ತನ್ನ ನರಜನ್ಮದೊಳಗೆ ಪೊರಳಿಸಿ

ಮರಳೀ ತನ್ನರಕದಲಿ ಪೊರಳಿಸಿ ಕೊಲುವನು

ಕುರು ನಿನ್ನ ಕುಹಕ ಕೊಳದಲ್ಲ ||೫೭||


ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ

ಸುಮ್ಮನೆಯಾಗಿ ಮಲಗಿಪ್ಪ

ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-

ಷ್ಕರ್ಮ-ದುಃಖಂಗಳು ತೊಡಸುವರೆ ||೫೮||


ರಕ್ಕಸರಸ್ತ್ರಗಳಿಂದ ಗಾಯವಡೆಯದ

ಅಕ್ಷಯಕಾಯದ ಶ್ರೀಕೃಷ್ಣ

ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ

ಹುಚ್ಚ ನೀ ಹರಿಯ ಗುಣವರಿಯ ||೫೯||


ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು

ತುಚ್ಛ ನರಕದೊಳು ಅನಲನಿಗೆ

ಬೆಚ್ಚುವನಲ್ಲ ಅದರಿಂದವಗೆ ನರಕ

ಮೆಚ್ಚುವರಲ್ಲ ಬುಧರೆಲ್ಲ ||೬೦||


ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ

ರಣರಂಗದಲಿ ಕ್ಷಮಿಸುವನೆ

ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ

ಮುನಿವ ಕಾಲಕ್ಕೆ ಮಹತ್ತಾಹ ||೬೧||


ತಾಯ ಪೊಟ್ಟೆಯಿಂದ ಮೂಲರೂಪವ ತೋರಿ

ಆಯುಧ ಸಹಿತ ಪೊರವಂಟ

ನ್ಯಾಯಕೋವಿದರು ಪುಟ್ಟಿದನೆಂಬರೆ

ಬಾಯಿಗೆ ಬಂದಂತೆ ಬೊಗಳದಿರು ||೬೨||


ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು

ಇಟ್ಟ ನವರತ್ನದ ಕಿರೀಟವು

ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-

ವಿಠ್ಠಲ ಪುಟ್ಟಿದನೆನಬಹುದೆ ||೬೩||


ವೃಷಭಹಂಸಮೂಷಕವಾಹನವೇರಿ ಮಾ-

ನಿಸರಂತೆ ಸುಳಿವ ಸುರರೆಲ್ಲ

ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು

ಕುಸುಮನಾಭನಿಗೆ ಸರಿಯುಂಟೆ ||೬೪||


ಒಂದೊಂದು ಗುಣಗಳು ಇದ್ದಾವು ಇವರಲ್ಲಿ

ಸಂದೆಣಿಸಿವೆ ಬಹು ದೋಷ

ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು

ಇಂದಿರೆ ಪತಿಯ ನೆನೆದಳು ||೬೫||


ಇಂತು ಚಿಂತಿಸಿ ರಮೆ ಸಂತ ರಾಮನ ಪದವ

ಸಂತೋಷ ಮನದಿ ನೆನೆವುತ್ತ

ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ

ಕಾಂತನಿದ್ದೆಡೆಗೆ ನಡೆದಳು ||೬೬||


ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ

ಚೆಂದವಾಗಿದ್ದ ಚೆಲುವನ

ಇಂದಿರೆ ಕಂಡು ಇವನೆ ತನಗೆ ಪತಿ-

ಯೆಂದವನ ಬಳಿಗೆ ನಡೆದಳು ||೬೭||


ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ

ಚಿತ್ತವ ಕೊಡದೆ ನಸುನಗುತ

ಚಿತ್ತವಕೊಡದೆ ನಸುನಗುತ ಬಂದು ಪುರು-

ಷೋತ್ತಮನ ಕಂಡು ನಮಿಸಿದಳು ||೬೮||


ನಾನಾಕುಸುಮಗಳಿಂದ ಮಾಡಿದ ಮಾಲೆಯ

ಶ್ರೀ ನಾರಿ ತನ್ನ ಕರದಲ್ಲಿ

ಪೀನಕಂಧರದ ತ್ರಿವಿಕ್ರಮರಾಯನ

ಕೊರಳಿನ ಮೇಲಿಟ್ಟು ನಮಿಸಿದಳು ||೬೯||


ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು

ಇಟ್ಟ ನವರತ್ನದ ಮುಕುಟವು

ದುಷ್ಟಮರ್ದನನೆಂಬ ಕಡೆಯ ಪಂಡೆಗಳು

ವಟ್ಟಿದ್ದ ಹರಿಗೆ ವಧುವಾದಳು ||೭೦||


ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು

ತಂಬಟೆ ಭೇರಿ ಪಟಹಗಳು

ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು

ಅಂಬುಧಿಯ ಮನೆಯಲ್ಲೆಸೆದವು ||೭೧||


ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-

ನರ್ಘ್ಯ ಪೂಜೆಯಿತ್ತನಳಿಯಗೆ

ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು

ಸದ್ಗತಿಯಿತ್ತು ಸಲಹೆಂದ ||೭೨||


ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-

ಲಾದ ಮುನೀಂದ್ರರು ಮುದದಿಂದ

ವಧೂವರರ ಮೆಲೆ ಶೋಭನದಕ್ಷತೆಯನು

ಮೊದವೀವುತ್ತ ತಳೆದರು ||೭೩||


ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು

ತುಂಬುರು ನಾರದರು ತುತಿಸುತ್ತ

ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-

ತಾಂಬರಧರನ ಮಹಿಮೆಯ ||೭೪||


ದೇವನಾರಿಯರೆಲ್ಲ ಬಂದೊದಗಿ ಪಾಠಕರು

ಓವಿ ಪಾಡುತ್ತ ಕುಣಿದರು

ದೇವತರುವಿನ ಹೂವಿನ ಮಳೆಗಳ

ಶ್ರೀವರನ ಮೆಲೆ ಕರೆದರು ||೭೫||


ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-

ರತ್ನ ಮಂಟಪದಿ ಪಸರಿಸಿ

ರತ್ನಮಂಟಪದಿ ಪಸರಿಸಿ ಕೃಷ್ಣನ

ಮುತ್ತೈದೆಯರೆಲ್ಲ ಕರೆದರು ||೭೬||


ಶೇಷಶಯನನೆ ಬಾ ದೋಷದೂರನೆ ಬಾ

ಭಾಸುರಕಾಯ ಹರಿಯೆ ಬಾ

ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-

ಲಾಸದಿಂದೆಮ್ಮ ಹಸೆಗೆ ಬಾ ||೭೭||


ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ

ಕುಂಜರವರದಾಯಕನೆ ಬಾ

ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-

ರಂಜನ ನಮ್ಮ ಹಸೆಗೆ ಬಾ ||೭೮||


ಆದಿಕಾಲದಲಿ ಆಲದೆಲೆಯ ಮೇಲೆ

ಶ್ರೀದೇವಿಯರೊಡನೆ ಪವಡಿಸಿದ

ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ

ಮೋದದಿಂದೆಮ್ಮ ಹಸೆಗೆ ಬಾ ||೭೯||


ಆದಿಕಾರಣನಾಗಿ ಆಗ ಮಲಗಿದ್ದು

ಮೋದ ಜೀವರ ತನ್ನ ಉದರದಲಿ

ಮೋದ ಜೀವರ ತನ್ನುದರದಲಿ ಇಂಬಿತ್ತ ಅ-

ನಾದಿ ಮೂರುತಿಯೆ ಹಸೆಗೆ ಬಾ ||೮೦||


ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ

ತಿರ್ಮಯವಾದ ಪದ್ಮದಲ್ಲಿ

ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ

ನಮ್ಮ ಮನೆಯ ಹಸೆಗೆ ಬಾ ||೮೧||


ನಾನಾವತಾರದಲಿ ನಂಬಿದ ಸುರರಿಗೆ

ಆನಂದವೀವ ಕರುಣಿ ಬಾ

ಆನಂದವೀವ ಕರುಣಿ ಬಾ ಶ್ರೀಕೃಷ್ಣ

ಶ್ರೀನಾರಿಯೊಡನೆ ಹಸೆಗೆಳು ||೮೨||


ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು

ಒಮ್ಮನದಿ ನೇಹವ ಮಾಡುವ

ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-

ರಮ್ಮ ಮೂರುತಿಯೆ ಹಸೆಗೆ ಬಾ ||೮೩||


ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-

ಕ್ಕೆ ಬಡಿಸಿದ ರಸಾಯನವ

ಸಕ್ಕರೆಗೂಡಿದ ಪಾಯಸ ಸವಿಯುವ

ರಕ್ಕಸವೈರಿಯೆ ಹಸೆಗೆ ಬಾ ||೮೪||


ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು

ಭದ್ರಮಂಟಪದಿ ಕುಳ್ಳಿರಿಸಿ

ಸ್ವಾದ್ವನ್ನಗಳನು ಬಡಿಸಲು ಕೈಗೊಂಡ

ಮುದ್ದು ನರಸಿಂಹ ಹಸೆಗೆ ಬಾ ||೮೫||


ಗರುಡನ ಮೇಲೇರಿ ಗಗನಮಾರ್ಗದಲ್ಲಿ

ತರತರದಿ ಸ್ತುತಿಪ ಸುರಸ್ತ್ರೀಯರ

ಮೆರೆವ ಗಂಧರ್ವರ ಗಾನವ ಸವಿಯುವ

ನರಹರಿ ನಮ್ಮ ಹಸೆಗೆ ಬಾ ||೮೬||


ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ

ಉಮ್ಮೆಯರಸ ನಮಿಸಿದ

ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-

ರಮ್ಮ ಮೂರುತಿಯೆ ಹಸೆಗೆ ಬಾ ||೮೭||


ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು

ಅಂದದ ಪೂಜೆಯ ಕೈಗೊಂಡು

ಅಂದದ ಪೂಜೆಯ ಕೈಗೊಂಡು ಸುರತರುವ

ಇಂದಿರೆಗಿತ್ತ ಹರಿಯೆ ಬಾ ||೮೮||


ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ

ಧರ್ಮರಕ್ಷಕನೆನಿಸುವ

ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-

ಸ್ಸೀಮ ಮಹಿಮ ಹಸೆಗೆ ಬಾ ||೮೯||


ಮುತ್ತಿನ ಸತ್ತಿಗೆಯ ನವರತ್ನದ ಚಾಮರ

ಸುತ್ತನಲಿವ ಸುರಸ್ತ್ರೀಯರ

ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ

ಪತ್ತಿನ ಹರಿಯೆ ಹಸೆಗೆ ಬಾ ||೯೦||


ಎನಲು ನಗುತ ಬಂದು ಹಸೆಯ ಮೇಲೆ

ವನಿತೆ ಲಕ್ಷ್ಮಿಯೊಡಗೂಡಿ

ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು

ದಿನದುತ್ಸವವ ನಡೆಸಿದರು ||೯೧||


ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-

ರತಿ ಮೊದಲಾದ ಸುರಸ್ತ್ರೀಯರು

ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ

ಅರ್ತಿಯಳಿಯಗೆ ತಳಿದರು ||೯೨||


ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ

ಮುತ್ತೈದೆಯರೆಲ್ಲ ಧವಳದ

ಮುತ್ತೆದೆರೆಲ್ಲ ಧವಳದ ಪದವ ಪಾ-

ಡುತ್ತಲೆತ್ತಿದರೆ ಸಿರಿವರಗೆ ||೯೩||


ಬೊಮ್ಮ ತನ್ನರಸಿ ಕೂಡೆ ಬಂದರೆಗಿದ

ಉಮ್ಮೆಯರಸ ನಮಿಸಿದ

ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ

ರಮ್ಮೆಯರಸಗೆ ಸಲಿಸಿದರು ||೯೪||


ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ

ಮುಕ್ತಾಸುರರು ಮುದದಿಂದ

ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ

ಮಸ್ತಕದ ಮಣಿಯ ಶಿವನಿತ್ತ ||೯೫||


ತನ್ನರಸಿ ಕೂಡೆ ಸವಿನುಡಿ ನುಡಿವಾಗ

ವದನದಲ್ಲಿದ್ದಗ್ನಿ ಕೆಡದಂತೆ

ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ

ತನ್ನಾಹುತಿ ದಿಬ್ಬಣ ಸುರರಿಗೆ ||೯೬||


ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ

ಉಬ್ಬಿದ ಹರುಷದಿ ಉಣಿಸಲು

ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು

ಸರ್ವರಿಗಡಿಗೆಯ ಮಾಡಿಸಿದ ||೯೭||


ಮಾವನ ಮನೆಯಲ್ಲಿ ದೇವರಿಗೌತಣವ

ದಾನವರು ಕೆಡಿಸದೆ ಬಿಡರೆಂದು

ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ

ದೇವಸ್ತ್ರೀವೇಷವ ಧರಿಸಿದ ||೯೮||


ತನ್ನ ಸೌಂದರ್ಯದಿಂದುನ್ನತಮಯವಾದ

ಲಾವಣ್ಯದಿಂದ ಮೆರೆವ ನಿಜಪತಿಯ

ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-

ಗನ್ಯರೇಕೆಂದು ಬೆರಗಾದಳು ||೯೯||


ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ

ಭಾವಕಿಯರೆಲ್ಲ ಮರುಳಾಗೆ

ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ

ಸೇವಕ ಸುರರಿಗುಣಿಸಿದ ||೧೦೦||


ನಾಗನ ಮೆಲೆ ತಾ ಮಲಗಿದ್ದಾಗ

ಆಗಲೆ ಜಗವ ಜತನದಿ

ಆಗಲೆ ಜಗವ ಜತನದಿ ಧರಿಸೆಂದು

ನಾಗಬಲಿಯ ನಡೆಸಿದ ||೧೦೧||


ಕ್ಷುಧೆಯ ಕಳೆವ ನವರತ್ನದ ಮಾಲೆಯ

ಮುದದಿಂದ ವಾರಿಧಿ ವಿಧಿಗಿತ್ತ

ಚದುರ ಹಾರವ ವಾಯುದೇವರಿಗಿತ್ತ

ವಿಧುವಿನ ಕಲೆಯ ಶಿವಗಿತ್ತ ||೧೦೨||


ಶಕ್ರ ಮೊದಲಾದ ದಿಕ್ಪಾಲಕರಿಗೆ

ಸೊಕ್ಕಿದ ಚೌದಂತ ಗಜಂಗಳ

ಉಕ್ಕಿದ ಮನದಿಂದ ಕೊಟ್ಟ ವರುಣ ಮದು-

ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||


ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ

ಚಿತ್ತವ ಸೆಳೆವಪ್ಸರಸ್ತ್ರೀಯರ

ಹತ್ತುಸಾವಿರ ಕೊಟ್ಟ ವರುಣದೇವ ಹರಿ-

ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||


ಪೊಳೆವ ನವರತ್ನದ ರಾಶಿಯ ತೆಗೆತೆಗೆದು

ಉಳಿದ ಅಮರರಿಗೆ ಸಲ್ಲಿಸಿದ

ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ

ಕಳುಹಿದನವರ ಮನೆಗಳಿಗೆ ||೧೦೫||


ಉನ್ನತ ನವರತ್ನಮಯವಾದ ಅರಮನೆಯ

ಚೆನ್ನೆ ಮಗಳಿಗೆ ವಿರಚಿಸಿ

ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ

ಇನ್ನೊಂದು ಕಡೆಯಡಿ ಇಡದಂತೆ ||೧೦೬||


ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ

ಜಯವಿತ್ತ ಕ್ಷೀರಾಂಬುಧಿಯಲ್ಲಿ

ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ

ದಯದಿ ನಮ್ಮೆಲ್ಲರ ಸಲಹಲಿ ||೧೦೭||


ಈ ಪದವ ಮಾಡಿದ ವಾದಿರಾಜ ಮುನಿಗೆ

ಶ್ರೀಪತಿಯಾದ ಹಯವದನ

ತಾಪವ ಕಳೆದು ತನ್ನ ಶ್ರೀಚರಣವ ಸ

ಮೀಪದಲ್ಲಿಟ್ಟು ಸಲಹಲಿ ||೧೦೮||


ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ

ಕಾಂತನ ಕಂದನೆನಿಸುವ

ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ

ಪಂಥದಿ ಪೇಳಿದ ಪದವಿದು ||೧೦೯||


ಶ್ರೀಯರಸ ಹಯವದನಪ್ರಿಯ ವಾದಿರಾಜ-

ರಾಯ ರಚಿಸಿದ ಪದವಿದು

ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-

ರಾಯಾಸದಿಂದ ಸುಖಿಪರು ||೧೧೦||


ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ

ಕ್ರಮ್ಮದಿ ಮಾಡಿ ವಿನೊದಿಸುವ

ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು

ಅಸುರ ಮೋಹನವೆ ನರನಟನೆ ||೧೧೧||


ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ

ಮದುಮಕ್ಕಳಿಗೆ ಮುದವಹುದು

ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು

ಮದನನಯ್ಯನ ಕೃಪೆಯಿಂದ ||೧೧೨||


ಶೋಭಾನವೆನ್ನಿರೆ ಸುರರೊಳು ಶುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||

********* 

..ಶೋಭಾನವೆನ್ನಿರೆ ಸುರರೊಳು ಸುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ ಪ ॥



ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ

ಕಡೆಗೋಲು ನೇಣ ಪಿಡಿದನೆ ॥

ಕಡಗೋಲು ನೇಣ ಪಿಡಿದನೆ ದೇವಕಿಯ

ತನಯಗಾರುತಿಯ ಬೆಳಗಿರೆ ॥ ಶೋಭಾನೆ ॥



ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ

ಕಾಂತೆ ಲಕ್ಷ್ಮಿಯ ಅರಸನೆ ॥

ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ

ಕಾಂಚನದಾರತಿಯ ಬೆಳಗಿರೆ ॥ ಶೋಭಾನೆ ॥



ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ

ಮುದ್ದು ರುಕ್ಮಿಣಿಯರಸನೆ ॥

ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ

ಮುತ್ತಿನಾರತಿಯ ಬೆಳಗಿರೆ ॥ ಶೋಭಾನೆ ॥



ಪಾಂಡವರ ಪ್ರಿಯನೆ ಚಾಣೂರಮರ್ದನನೆ

ಸತ್ಯಭಾಮೆಯ ಅರಸನೆ ॥

ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ

ನವರತ್ನದಾರತಿಯ ಬೆಳಗಿರೆ ॥ ಶೋಭಾನೆ ॥



ಸೋದರ ಮಾವನ ಮಧುರೆಲಿ ಮಡುಹಿದ

ತಾಯಿಯ ಸೆರೆಯ ಬಿಡಿಸಿದ ॥

ತಾಯಿಯ ಸೆರೆಯ ಬಿಡಿಸಿದ ಹಯವದನ

ದೇವಗಾರತಿಯ ಬೆಳಗಿರೆ ॥ ಶೋಭಾನೆ ॥



ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ

ಹತ್ತಾವತಾರದ ಹಯವದನಗ

ಹತ್ತಾವತಾರದ ಹಯವದನ ದೇವಗ

ಹೊಸ ಮುತ್ತಿನಾರುತಿಯ ಬೆಳಗಿರೆ ॥ ಶೋಭಾನೆ ॥

**********



ಗುರುವಾರ, ಜುಲೈ 30, 2026

Oldsmobile

 


N

Oldsmobile

1897ರಲ್ಲಿ ರಾನ್ಸಮ್ ಇ. ಓಲ್ಡ್ಸ್  ಎಂಬುವರಿಂದ  Oldsmobile  ಓಲ್ಡ್ಸ್ ಮೋಟಾರ್ ವೆಹಿಕಲ್ ಕಂಪನಿ"ಯಾಗಿ ಆರಂಭವಾಯಿತು. 

 ಸಾಮೂಹಿಕ ಉತ್ಪಾದನೆಗಾಗಿ ಅಸೆಂಬ್ಲಿ ಲೈನ್ ಪದ್ಧತಿಯನ್ನು ಮೊದಲು ಪರಿಚಯಿಸಿದ ಕೀರ್ತಿ ಈ ಕಂಪನಿಗೆ ಸಲ್ಲುತ್ತದೆ. 

1940ರಲ್ಲಿ ಮೊಟ್ಟಮೊದಲ ಸ್ವಯಂಚಾಲಿತ ಪ್ರಸರಣ (automatic transmission) ವ್ಯವಸ್ಥೆಯನ್ನು ಮಾರುಕಟ್ಟೆಗೆ ತಂದಿತು. 

107 ವರ್ಷಗಳ ದೀರ್ಘ ಇತಿಹಾಸದ ನಂತರ, ಜನರಲ್ ಮೋಟಾರ್ಸ್  ಕಂಪನಿಯು 2004ರಲ್ಲಿ ಓಲ್ಡ್ಸ್‌ಮೊಬೈಲ್ ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿತು. 



ಖಾಲಿ ಮನಸ್ಸು - ಜಿಡ್ಡು ಕೃಷ್ಣಮೂರ್ತಿ

 


ಜಿಡ್ಡು ಕೃಷ್ಣಮೂರ್ತಿಯವರ ಪ್ರಕಾರ, ಖಾಲಿ ಮನಸ್ಸು ಅಥವಾ ಶೂನ್ಯ ಚಿಂತನೆ ಎಂದರೆ ನಿರ್ಜೀವ ಸ್ಥಿತಿಯಲ್ಲ, ಬದಲಿಗೆ ಹಳೆಯ ನಂಬಿಕೆಗಳು ಮತ್ತು ಗೊಂದಲಗಳಿಂದ ಬಿಡುಡಡೆ ಹೊಂದಿದ ಶುದ್ಧ ಜಾಗರೂಕತೆ. ಜ್ಞಾನೋದಯ ಮತ್ತು ಆಂತರಿಕ ಶಾಂತಿಯನ್ನು ಪಡೆಯಲು ಆಲೋಚನೆಗಳ ಮಿತಿಯನ್ನು ಅರಿಯುವುದು ಮುಖ್ಯವಾಗಿದೆ.

ಹಳೆಯ ಅನುಭವಗಳ ಆಧಾರದ ಮೇಲೆ ಹುಟ್ಟುವ ಆಲೋಚನೆಗಳು ಎಂದಿಗೂ ಹೊಸದನ್ನು ಅಥವಾ ಸತ್ಯವನ್ನು ಕಾಣಲಾರವು. 

 ಆಲೋಚನೆಗಳಿಂದ ಮನಸ್ಸು ಸಂಪೂರ್ಣವಾಗಿ ಮುಕ್ತವಾದಾಗ  ಅಲ್ಲಿ ಯಾವುದೇ ಕೇಂದ್ರಬಿಂದು ಅಥವಾ ಅಹಂ ಇರುವುದಿಲ್ಲ. 

ಪ್ರಯತ್ನಪಟ್ಟು ಮನಸ್ಸನ್ನು ಖಾಲಿ ಮಾಡಲು ಸಾಧ್ಯವಿಲ್ಲ; ಬದಲಿಗೆ ಆಲೋಚನೆಗಳ ಓಟವನ್ನು ತೀರ್ಪು ನೀಡದೆ ಗಮನಿಸಿದಾಗ ಮಾತ್ರ ಮೌನ ತಾನಾಗಿಯೇ ಉಂಟಾಗುತ್ತದೆ. 

 ನಮ್ಮ ದೈನಂದಿನ ಭಯ, ಆಸೆ ಮತ್ತು ದುಃಖಗಳ ಹಿಂದೆ ಇರುವ ಆಲೋಚನೆಗಳನ್ನು ವಿಮರ್ಶೆಯಿಲ್ಲದೆ ಗಮನಿಸುವುದು. 

 ಹಳೆಯ ಜ್ಞಾನದ ಬಂಧನದಿಂದ ಹೊರಬಂದಾಗ ಮನಸ್ಸು ತಾಜಾವಾಗಿರುತ್ತದೆ ಮತ್ತು ಸೃಜನಶೀಲತೆ ಹುಟ್ಟುತ್ತದೆ. 



ಗುಲಾಬ್ ಜಾಮೂನ್ ಬರ್ಫಿ

 



ಗುಲಾಬ್ ಜಾಮೂನ್ ಬರ್ಫಿ

ಬೇಕಾಗುವ ಸಾಮಗ್ರಿಗಳು 

ಗುಲಾಬ್ ಜಾಮೂನ್  ಹಿಟ್ಟು  - 1 ಕಪ್ 

ಸಕ್ಕರೆ - 1 ಕಪ್ 

ನೀರು - ಅರ್ಧ ಕಪ್ 

ತುಪ್ಪ - 3 ದೊಡ್ಡ ಚಮಚ 

ಹಾಲು - ಅರ್ಧ ಕಪ್ 

ಏಲಕ್ಕಿ ಪುಡಿ - ಸ್ವಲ್ಪ 

ಮಾಡುವ ವಿಧಾನ 

ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಜಾಮೂನ್ ಮಿಕ್ಸ್ ಸೇರಿಸಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. 

ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಹಾಕಿ ಪಾಕ ತಯಾರಿಸಿ. 

ಹುರಿದ ಹಿಟ್ಟಿಗೆ ಹಾಲು ಮತ್ತು ಸಕ್ಕರೆ ಪಾಕ ಸೇರಿಸಿ ಗಂಟಿಲ್ಲದಂತೆ ಕೈಯಾಡಿಸಿ. 

ಮಿಶ್ರಣವು ಗಟ್ಟಿಯಾಗಿ ಬಾಣಲೆ ಬಿಟ್ಟು ಬರುವವರೆಗೆ ಸಣ್ಣ ಉರಿಯಲ್ಲಿ ಸತತವಾಗಿ ತಿರುಗಿಸಿ. 

ತಟ್ಟೆಗೆ ತುಪ್ಪ ಸವರಿ, ತಯಾರಾದ ಮಿಶ್ರಣವನ್ನು ಹಾಕಿ ಸಮವಾಗಿ ಹರಡಿ ಆರಿಸಿಕೊಳ್ಳಿ. 

ಸಂಪೂರ್ಣ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ತುಂಡರಿಸಿ. 


 

ಭಾನುವಾರ, ಜುಲೈ 19, 2026

Vishwanathashtakam,S.P. Balasubrahmanyam

 



 Kasi Vishwanathashtakam

gaṅgā taraṅga ramaṇīya jaṭā kalāpaṃ
gaurī nirantara vibhūṣita vāma bhāgaṃ
nārāyaṇa priyamanaṅga madāpahāraṃ
vārāṇaśī purapatiṃ bhaja viśvanātham ॥ 1 ॥

vāchāmagōcharamanēka guṇa svarūpaṃ
vāgīśa viṣṇu sura sēvita pāda padmaṃ
vāmēṇa vigraha varēna kalatravantaṃ
vārāṇaśī purapatiṃ bhaja viśvanātham ॥ 2 ॥

bhūtādipaṃ bhujaga bhūṣaṇa bhūṣitāṅgaṃ
vyāghrāñjināṃ baradharaṃ, jaṭilaṃ, trinētraṃ
pāśāṅkuśābhaya varaprada śūlapāṇiṃ
vārāṇaśī purapatiṃ bhaja viśvanātham ॥ 3 ॥

sītāṃśu śōbhita kirīṭa virājamānaṃ
bālēkṣaṇātala viśōṣita pañchabāṇaṃ
nāgādhipā rachita bāsura karṇa pūraṃ
vārāṇaśī purapatiṃ bhaja viśvanātham ॥ 4 ॥

pañchānanaṃ durita matta mataṅgajānāṃ
nāgāntakaṃ dhanuja puṅgava pannāgānāṃ
dāvānalaṃ maraṇa śōka jarāṭavīnāṃ
vārāṇaśī purapatiṃ bhaja viśvanātham ॥ 5 ॥

tējōmayaṃ saguṇa nirguṇamadvitīyaṃ
ānanda kandamaparājita mapramēyaṃ
nāgātmakaṃ sakala niṣkaḻamātma rūpaṃ
vārāṇaśī purapatiṃ bhaja viśvanātham ॥ 6 ॥

āśāṃ vihāya parihṛtya paraśya nindāṃ
pāpē rathiṃ cha sunivārya manassamādhau
ādhāya hṛt-kamala madhya gataṃ parēśaṃ
vārāṇaśī purapatiṃ bhaja viśvanātham ॥ 7 ॥

rāgādhi dōṣa rahitaṃ svajanānurāgaṃ
vairāgya śānti nilayaṃ girijā sahāyaṃ
mādhurya dhairya subhagaṃ garaḻābhirāmaṃ
vārāṇaśī purapatiṃ bhaja viśvanātham ॥ 8 ॥

vārāṇaśī pura patē sthavanaṃ śivasya
vyākhyātaṃ aṣṭakamidaṃ paṭhatē manuṣya
vidyāṃ śriyaṃ vipula saukhyamananta kīrtiṃ
samprāpya dēva nilayē labhatē cha mōkṣam ॥

viśvanāthāṣṭakamidaṃ puṇyaṃ yaḥ paṭhēḥ śiva sannidhau
śivalōkamavāpnōti śivēnasaha mōdatē ॥

ಶುಕ್ರವಾರ, ಜುಲೈ 17, 2026

Naguva Nayana - Pallavi Anupallavi


 

Naguva Nayana Song
Sing along the lyrics of Naguva Nayana Song from Pallavi Anu Pallavi. Lyrics by R. N. Jayagopal, sung by S. Janaki, S. P. Balasubrahmanyam.
Released on: Dec 31, 1983
Language: Kannada


Nqaguva Nayana Lyrics

La la la


Hmmm Aa ha ha La la la


Naguva nayana madhura mouna


MiDiva hrudaya ire maatheke


Hosa bhaasheyidu rasa kaavyavidu


Ida haaDalu kavi beke


Naguva nayana madhura mouna


MiDiva hrudaya ire maatheke


Ningaagi heLuve kathe nooranu


Naanindu nagisuve ee ninnanu


IruLallu kaaNuve kiru nageyanu


KaNNalli hucchedda honganasanu


Jotheyaagi naDeve naa maLeyalu


BiDadante hiDive ee kaiyyanu


GeLeya jothege haari baruve


Baana yelle daaTi nalive


Naguva nayana madhura mouna


MiDiva hrudaya ire maatheke


Ee raathri haaDo pisumaatali


Na kaNDe inidaada savi raagava


Neenalli naanilli ekaantade


Na kaNDe nammade hosa lokava


Ee sneha tandide edeyalli


Endendu aLisada rangoli


Aase hoova haasi kaade


NaDe nee kanasa hosaki biDade


Naguva nayana madhura mouna


MiDiva hrudaya ire maatheke


Hosa bhaasheyidu rasa kaavyavidu


Ida haaDalu kavi beke

ಶುಕ್ರವಾರ, ಜುಲೈ 10, 2026

Oo Antava Oo Oo Antava

 


Oo Antava Oo Oo Antava Lyrics


Koka Koka Koka Kadithe

Kora Kora Mantu Choosthaaru

Potti Potti Gown-ey Vesthe

Patti Patti Choosthaaru


Koka Kaadhu Gown-u

Kaadhu Kattulona Yemundi

Mee Kallallone Antha Undhi

Mee Maga Buddhe Vankara Buddhi


Oo Antava Maava

Oo Oo Antava Maava

Oo Antava Maava

Oo Oo Antava Maava


Thella Thella Gunte Okadu

Thallaa Kindhulowthadu

Nalla Nalla Gunte Okadu

Allarallari Chesthadu


Thelupu Nalupu Kaadhu Meeku

Rangutho Paniyemundhi

Sandhu Dorikindhante Saalu

Mee Maga Buddhe Vankara Buddhi


Oo Antava Maava

Oo Oo Antava Maava

Haaye Oo Antava Maava

Oo Oo Antava Maava


Yetthu Yetthu Gunte Okadu

Yegiri Ganthulesthaadu

Kurasa Kurasa Gunte Okadu

Murisi Murisi Pothaadu


Yetthu Kaadhu Kurasa Kaadhu

Meeko Satthem Sebuthaanu

Andhina Dhraakshe Theepi Meeku

Mee Maga Buddhe Vankara Buddhi


Oo Antava Maava

Oo Oo Antava Maava

Haaye Oo Antava Maava

Oo Oo Antava Maava


Boddhu Boddhu Gunte Okadu

Muddhu Gunnav Antaadu

Sanna Sannangunte Okadu

Sarada Padipothuntaadu


Boddhu Kaadhu Sannam Kaadhu

Vompu Sompu Kaadhandi

Ontiga Sikkamante Saalu

Mee Maga Buddhe Vankara Buddhi


Oo Antava Maava

Oo Oo Antava Maava

Oye Oo Antava Maava

Oo Oo Antava Maava


Peddha Peddha Manishi Laaga

Okadu Pojulu Kodathaadu

Manchi Manchi Manasundantu

Okadu Neethulu Sebuthaadu


Manchi Kaadhu Seddaa Kaadhu

Anthaa Okate Jathandi

Deepalanni Aarpesaaka


Uu Uu Uu Uu

Deepalanni Aarpesaka

Andhari Buddhi Vankara Buddhe



Oo Antava Mava

Oo Oo Antava Mava

Oo Antame Mapa

Oo Oo Antama Papa


Oo Antava Mava

Oo Oo Antava Mava

Oo Antame Papa

Oo Oo Antama Papa


Oo Antava Maava

Oo Oo Antava Maava

 

Sing this song

Eepariya Sobagu -

 


Ee pariya sobagAva dEvarali kANe

gOpijanapriya gOpalagallade


doreyatanadali nODe DharaNidEvige ramaNa

siriyatanadali nODe shrikAntanu

hiriyatanadali nODe sarasijOdBhavanayya

guruvutanadali nODe jagadAdi guruvu


pAvanatvadi nODe amaragangAjanaka

dEvatvadali nODe divijaroDeya

lAvanyadali nODe lOkamohakanayya

Ava dhairyadi nODe asurAntaka


gaganadali sancharipa garuDa dEvane turaga

jagatIdhara shEsha pariyanka shayana

nigamagOchara purandara viTalagallade

migilAda dEvrige Ee bhAgyavunTe


Meaning :


I dont see any other God who has got privileges (qualities) which GopAla, beloved of gopis, has.


If you see in terms of kinship, He is king of the Earth (BhUdEvi)

If you see in terms of wealth, He is husband of Shree (Lakshmi)

If you see in terms of eldership, He is father of Brahma.

If you see in terms of mastership, He is First master of Universe.


If you see in terms of purity, He is Father of Ganga, who is immortal.

If you see in amongst dEvatAs, He is head of all.

If you see in terms of charm, He is loved by all.

If you see in terms of braveness, He is killer of many asuras (rAkshasas).


GaruDa who moves in sky is His chariot

ShEsha who holds the earth is His cot (bed)

Except for Purandara viTala who is seen (or understood) thru Vedas,

who else can have such privileges.


Back

Vidyabhushana

vidyabhushanaofficial

ಗುರುವಾರ, ಜುಲೈ 9, 2026

Godhi Banna Sadharana Mykattu. 2016







 



Director : Hemanth M Rao

Banner : Pushkar Films, Lost & Found Films

Producer : Pushkara Mallikarjunaiah

Story : Hemanth M Rao

Screenplay : Hemanth M Rao

Dialogue : Hemanth M Rao

Lyrics :  Sudarshan D C, Rakshith Shetty, Dhananjay Ranjan, Kiran Kaverapa, Sharath Bhagavan

Music : Charan Raj

Year : 2016

Released on June 3, 2016

Godhi Banna Sadharana Mykattu is an acclaimed Kannada drama directed by Hemanth M. Rao in his debut.

 It explores the emotional journey of an ambitious career-driven son (Rakshit Shetty) searching for his missing, Alzheimer's-stricken father (Anant Nag). 


•Director Hemanth  shaped the core of the story around his own parents' real-life romance and his personal fascination with the idea of a family member going missing. 

He also personally borrowed funds from his father to help produce the film. 

The film was a massive commercial hit, grossing between ₹12—15 crore on a modest ₹2.4 crore budget. It holds an impressive 8.6/10 rating on IMDb. 

The movie beautifully captures the heritage, old-world charm, and nostalgia of the Basavanagudi locality in  Bengaluru . 


ಸೋಮವಾರ, ಜುಲೈ 6, 2026

ಸಬ್ಬಸಿಗೆ ಸೊಪ್ಪಿನ ಚಟ್ನಿ (Dill Leaves Chutney)

 


ಸಬ್ಬಸಿಗೆ ಸೊಪ್ಪಿನ ಚಟ್ನಿ (Dill Leaves Chutney) ತುಂಬಾ ಆರೋಗ್ಯಕರ ಮತ್ತು ರುಚಿಕರ . ಇದು ಇಡ್ಲಿ, ದೋಸೆ ಮತ್ತು ಅನ್ನಕ್ಕೆ ಸೂಪರ್ ಕಾಂಬಿನೇಷನ್. ಕೇವಲ ೧೦ ನಿಮಿಷದಲ್ಲಿ ಇದನ್ನು ಮಾಡಬಹುದು.


ಬೇಕಾಗುವ ಸಾಮಗ್ರಿಗಳು

ಸಬ್ಬಸಿಗೆ ಸೊಪ್ಪು: 1 ಕಪ್ (ಸಣ್ಣದಾಗಿ ಹೆಚ್ಚಿದ್ದು), ಹಸಿಮೆಣಸಿನಕಾಯಿ: 3 ಅಥವಾ 4, ತೆಂಗಿನಕಾಯಿ ತುರಿ: ಅರ್ಧ ಕಪ್, 

ಉದ್ದಿನ ಬೇಳೆ: 1 ಚಮಚ, ಸಾಸಿವೆ: ಕಾಲು ಚಮಚ, ಹುಣಸೆಹಣ್ಣು: ಸಣ್ಣ ತುಂಡು, ಉಪ್ಪು: ರುಚಿಗೆ ತಕ್ಕಷ್ಟು ಎಣ್ಣೆ: 1 ಚಮಚ,


ಮಾಡುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಉದ್ದಿನ ಬೇಳೆ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ . ಸಬ್ಬಸಿಗೆ ಸೊಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ 2 ನಿಮಿಷ ಬಾಡಿಸಿ .ಉರಿಯನ್ನು ಆರಿಸಿ, ತಣ್ಣಗಾಗಲು ಬಿಡಿ.

ಮಿಕ್ಸಿ ಜಾರಿಗೆ ಹುರಿದ ಮಿಶ್ರಣ, ತೆಂಗಿನಕಾಯಿ ತುರಿ, ಹುಣಸೆಹಣ್ಣು, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಬೇಕಿದ್ದರೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಈಗ ರುಚಿಯಾದ ಚಟ್ನಿ ರೆಡಿ.

ಶುಕ್ರವಾರ, ಜೂನ್ 26, 2026

Munjaane Manjalli - Just Maath Maathali,

ಏಕಾಂತ (Solitude) - ಜಿಡ್ಡು ಕೃಷ್ಣಮೂರ್ತಿ

 



ಪ್ರಸಿದ್ಧ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಪ್ರಕಾರ, ಒಂಟಿತನ (Loneliness) ಎಂದರೆ ಪ್ರತ್ಯೇಕತೆಯ ನೋವು. ಆದರೆ ನಿಜವಾದ ಏಕಾಂತ (Solitude) ಎಂದರೆ ಯಾವುದೇ ಭಯವಿಲ್ಲದೆ ಸ್ವಯಂ ಅನ್ವೇಷಣೆ ಮಾಡಿಕೊಳ್ಳುವುದು.

 ಇದು ಮನಸ್ಸಿನ ಎಲ್ಲಾ ಗೊಂದಲಗಳನ್ನು ನಿವಾರಿಸಿ, ನೈಜ ಸ್ವಾತಂತ್ರ್ಯವನ್ನು ನೀಡುತ್ತದೆ.

ಏಕಾಂತ ಮತ್ತು ಒಂಟಿತನದ ಬಗ್ಗೆ ಅವರ ಚಿಂತನೆಗಳು ಇಲ್ಲಿವೆ:

ಒಂಟಿತನ (Loneliness): ಇದು ಇತರರೊಂದಿಗೆ ಅಥವಾ ಪ್ರಪಂಚದೊಂದಿಗೆ ಸಂಪರ್ಕ ಕಳೆದುಕೊಂಡಾಗ ಉಂಟಾಗುವ ಖಾಲಿ ಭಾವನೆ. ಇದು ನೋವಿನಿಂದ ಕೂಡಿದ್ದು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೆದರುವ ಸ್ಥಿತಿ .

ಏಕಾಂತ(Solitude): ಇದು ಮುಕ್ತವಾದ ಸ್ಥಿತಿ. ಏಕಾಂತದಲ್ಲಿ ಮನಸ್ಸು ಸಮಾಜದ ನಿಯಮಗಳು ಮತ್ತು ಹಳೆಯ ಆಲೋಚನೆಗಳಿಂದ ಮುಕ್ತವಾಗಿರುತ್ತದೆ. ಇದು ಸ್ವಯಂ-ಚಿಂತನೆಗೆ  ದಾರಿ ಮಾಡಿಕೊಡುತ್ತದೆ.

ಭಯಮುಕ್ತ ಮನಸ್ಸು: ಒಂಟಿತನದ ನೋವಿನಿಂದ ತಪ್ಪಿಸಿಕೊಳ್ಳಲು ಓಡುವ ಬದಲು, ಅದನ್ನು ನೇರವಾಗಿ ಎದುರಿಸಬೇಕು. ಆಗ ನಮಗೆ ಒಳಿತು ಮತ್ತು ಕೆಡುಕುಗಳ ಅರಿವಾಗಿ  ನಿಜವಾದ ಶಾಂತಿ ಸಿಗುತ್ತದೆ.

ಭಾನುವಾರ, ಜೂನ್ 21, 2026

Devakinandana - Vidyabhushan

 

 

 Devaki Nandana Hari Vasudeva is a famous devotional song sung by Sri Vidyabhushana, composed by the great saint Purandara Dasa. It is a beautiful praise of Lord Krishna.

The lyrics of this song are provided below:

Pallavi

Devaki nandana hari VasudevaDevaki nandana hari Vasudeva

Charanam 1

Kamsa mardana hari kaustubhabharanaHamsa vahana mukha vandita charana

Charanam 2

Shankha cakra dhara shri GovindaPankaja locana purnananda

Charanam 3

Makara kundala dhara satara vibhasaRukmini vallabha sakala lokesha [5]

Charanam 4

Nigamoddhara navanitacoraKhagapati vahana jagadadhara

Charanam 5

Vara Velapura cenna prasannaPurandara vittala sadgunapurna







Mungaru Maleye, Mungaru Male,Sonu Nigam


 

Mungaru Maleye..

Yenu ninna Hanigala Leele



Ninna Mugila Saale,

Dhareya Korala Premada Maale

Suriva Olume Aajadi Malege

Preeti Moodide...


Yaava Chippinalli,

Yaava Haniyu Muttaguvudo,

Olavu Yelli Kudiyoduvudo,

Tiliyadagide


Mungaru Maleye..

Yenu Ninna Hanigala Leele...



Bhuvi Kenne Tumba,

Mugilu Surida Muttina Gurutu

Nanna Yedeya Tumba,

Avalu Banda Heggeya Gurutu

Hegge Gegge Aa Savi Saddu,

Premanadavoo


Yede Mugilinalli,

Rangu challi Nintalu Avalu,

Baredu Hesaru Kamanabillu,

Yenu Modeyoo...



Mungaru Maleye..


Yenu Ninna Hanigala Leele



Yava Hanigalinda,

Yava Nelavu Hasiraguvudo,

Yaara Sparshadindaa,

Yara Manavu Hasivaguvudo..

Yara Usirali Yara Hesaro

Yaru Baredaro..


Yava Preeti Huvu,

Yara Hrudayadallaraluvudo..

Yaara Prema Poojege Mudipo,

Yaru Balloro...



Mungaru Maleye..


Yenu ninna Hanigala Leele


Olava Chandamama...

Naguta Banda Manadangalake

Preeti Belakinalli...

Hrudaya Horatide Meravanige,

Avala Prema Doorinakadege,

Preeti Payanavoo...



Pranaya Doorinalli,

Kaledu Hogo Sukava Indu

Dhanyanaade Padedukondu

Hosa Janmavoo...


Mungaru Maleye..


Yenu ninna Hanigala Leele

 

ಗುರುವಾರ, ಜೂನ್ 18, 2026

ಸಲಾಕ್ (Salak)

 



ಸಲಾಕ್ (Salak) ಅಥವಾ 'ಹಾವಿನ ಹಣ್ಣು' (Snake fruit) ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಒಂದು ವಿಶಿಷ್ಟ ಹಣ್ಣು. ಇದರ ಹೊರಭಾಗವು ಹಾವಿನ ಚರ್ಮದಂತೆ ಚಿಪ್ಪು ಚಿಪ್ಪಾಗಿ ಮುಳ್ಳಿನಿಂದ ಕೂಡಿರುತ್ತದೆ. ಇದು ಸಿಹಿ ಮತ್ತು ಹುಳಿಯ ಮಿಶ್ರ ರುಚಿಯನ್ನು ಹೊಂದಿರುತ್ತದೆ. 

ಸಲಾಕ್ ಹಣ್ಣಿನ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ: 


• ಹೆಸರಿನ ಮೂಲ: ಹಾವಿನ ಚರ್ಮದಂತಿರುವ ತೊಗಟೆಯಿಂದಾಗಿ ಇದಕ್ಕೆ 'ಹಾವಿನ ಹಣ್ಣು' (Snake Fruit) ಎಂಬ ಹೆಸರು ಬಂದಿದೆ. 

• ಬೆಳೆಯುವ ಪ್ರದೇಶ: ಇದು ಇಂಡೋನೇಷ್ಯಾ ಮತ್ತು ಮಲೇಷ್ಯಾದ ಉಷ್ಣವಲಯದ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುತ್ತದೆ. 

• ಪೋಷಕಾಂಶಗಳು: ವಿಟಮಿನ್ ಸಿ, ಪೊಟ್ಯಾಸಿಯಮ್, ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಸಮೃದ್ಧವಾಗಿವೆ. 

• ಆರೋಗ್ಯ ಪ್ರಯೋಜನಗಳು: ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕಣ್ಣಿನ ದೃಷ್ಟಿ ಹೆಚ್ಚಿಸಲು ಇದು ತುಂಬಾ ಒಳ್ಳೆಯದು ಎಂದು ನಂಬಲಾಗಿದೆ. 

• ರುಚಿ: ತಿರುಳು ಬಿಳಿ ಬಣ್ಣದಲ್ಲಿದ್ದು, ಸೇಬಿನಂತೆ ಗರಿಗರಿಯಾಗಿ ಮತ್ತು ಸ್ಟ್ರಾಬೆರಿಯಂತೆ ಸಿಹಿಯಾದ ರುಚಿಯನ್ನು ನೀಡುತ್ತದೆ.