ಗುರುವಾರ, ಮೇ 14, 2026

Dasana Maadiko Enna, Vidyabhushan,

 



 

ದಾಸನ ಮಾಡಿಕೊ ಎನ್ನ ಸ್ವಾಮಿ

ಸಾಸಿರನಾಮದ ವೆಂಕಟರಮಣ


ದುರುಬುದ್ಧಿಗಳನೆಲ್ಲ ಬಿಡಿಸೋ

ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ


ಚರಣ ಸೇವೆ ಎನಗೆ ಕೊಡಿಸೋ

ಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ


ದೃಢಭಕ್ತಿ ನಿನ್ನಲಿ ಬೇಡಿ

ನಾ ಅಡಿಗೆರಗುವೆನಯ್ಯ ಅನುದಿನ ಪಾಡಿ


ಕಡೆಗಣ್ಣಲೇಕೆನ್ನನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ


ಮೊರೆಹೊಕ್ಕವರ ಕಾವ ಬಿರುದು

ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು


ದುರಿತಗಳೆಲ್ಲವ ತರಿದು

ಸಿರಿ ಪುರಂದರ ವಿಠಲ ಎನ್ನನು ಪೊರೆದು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ